ಬೆಟ್ಟಗಳ ನಡುವಲಿ

ಮಲೆನಾಡಿನ ಸಿರಿಸೊಬಗಲಿ…
ಬೆಟ್ಟಗಳ ಏಕಾಂತದ ನಡುವಲಿ
ಸುತ್ತಲಿನ ಗ್ರಾಮಗಳಿಗೆ…
ಬಹು ದೂರವಾಗಿತ್ತು ಆ ಊರು

ಸರಕಾರ ಮನ್ನಣೆಯಲಿ
ಶಾಲೆಯೊಂದು ನಡೆದಿತ್ತು
ತಾಯಿ, ಗಡಿಗಳೆಂಬ ದ್ವಿಭಾಷಾ
ಶಿಕ್ಷಕರನು ಹೊಂದಿತ್ತು
ಮಾತುಗಾರನ ಹೊಗೆ ಉಗಳುವರ
ಮೊಗಶಾಲೆಯಾಗಿ ಕಲಿಸುವ ಶಾಲೆಯಿತ್ತು

ಶಾಲೆ ಮಕ್ಕಳನು
ಕಳಿಸದ ಗ್ರಾಮದ ಜನರು
ದಿನವಿಡಿ ಸುರಾಧೀನರಾಗಿರುತ್ತಿದ್ದರು
ಶಾಲೆಗೆ ಕಳಿಸಿದರೆ ನಮಗೇನಾಗಿತೆನ್ನುತ
ದನ ಸೆಗಣಿ ಕಲೆ ಹಾಕಿಸುವ
ಗುರಿಯಲಿ ಮಾತ್ರ ಮುನ್ನಡೆಯುತ್ತಿದ್ದರು

ಪರಿಸರ ಸಂಘ ದೋಷದಿ
ಮರೆತರು ಶಿಕ್ಷಕರು ಶಿಕ್ಷಣದ
ಮೂಲ ಧ್ಯೇಯೋದ್ದೇಶ ಗುರಿಗಳನು
ಕರ್ತವ್ಯ ಕತ್ತು ಹಿಸುಕುತಲಿವರು
ಹೆಮ್ಮೆಯಲಿ ಎದೆಯುಬ್ಬಿಸಿ ಇರುತಿಹರು

ಮೇಲಧಿಕಾರಿಯ ಮುದ್ದು ಮುಖವು
ವರ್ಷಕ್ಕೊಮ್ಮೆ ನೋಡಲು ಸಿಗುವದು
ಮೂರು ಅಂಕಿಯ ಖಡಕ ನೋಟೊಂದು
ಕಾಣದಂತೆ ಜೀಬಿಗೆ ಹಾಕಿದರೆ ಸಾಕು
ಆಡುವೆವು ಹರ್ಷದಲಿ ವರ್ಷವಿಡಿ
ಎನ್ನುವ ಶಿಕ್ಷಣ ಚೋರರಿಗೆ
ಶಿಕ್ಷೆ… ನಿಸರ್ಗ… ನೀಡಿತೇ!….

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಷ್ಟ್ರಪಿತ
Next post ಮಣ್ಣು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys